ಹೊರತು

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ
ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು
ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು
ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು
ನೆನಪು ಹಣಿಕುತ್ತಿರಬಹುದು

ರಾತ್ರಿಯ ತಣ್ಣನೆ ಗಾಳಿ ಮಣ್ಣಿನ ವಾಸನೆ ಉಪ್ಪಿನ
ವಾಸನೆ ತರುವ ಕಿನಾರೆ ಗಾಳಿ ನಿದ್ದೆ ಜೊಂಪಿನ ಬೇಸಗೆಯ
ರಾತ್ರಿ ಗಾಳಿ ಗಾರೆ ಗೋಡೆಯ ಮೇಲೆ ವ್ಯರ್ಥ ಬಡಿದು
ಬೆಳಗಾದಾಗ ಇಲ್ಲಿಗೆ ಬಂದು ತಲುಪುತ್ತಿರುವ ಧ್ವನಿಗಳೇ ಬೇರೆ
ಅವುಗಳ ರೀತಿಯೇ ಬೇರೆ ಆ ಅಲೆಗಳೇ ಬೇರೆ
ರೇಲ್ವೆಯ ಹರಿತ ಧ್ವನಿ ಟ್ರಕ್ಕಿನ ಖಂಡಿ ಧ್ವನಿ
ಯಾವ ಜಗತ್ತಿಗೋ ಹೋಗುತ್ತಿರುವ ಜನರ ಸ್ಟೀಮರಿನ
ಸೈರರಿನ ಧ್ವನಿ ಸ್ವಂತಕ್ಕೆ ಸಂಬಂಧವಿಲ್ಲದೇ
ಮೂಕ ಧ್ವನಿಯಲ್ಲಿ ಸೇರಿ ನಿಶ್ಶಬ್ದವಾಗಿ
ಬಂದು ಬಡಿಯುವ ಶೈಲಿಯೇ ಬೇರೆ
ಈ ಗೋಡೆಗಳ ಒಳಗೆ
ಆ ಜಗತ್ತೇ ಬೇರೆ-ಎಂದಿಗೂ ಸಂಬಂಧವಿರದ
ಮಣ್ಣ ಬೊಂಬೆಗಳ ಸಾಲು ನಿರ್ವಿಕಾರ
ಆಕಾರಗಳ ಸಾಲು ಈ ಗೋಡೆಗಳ ಬದಿಗೆ
ನೆರಳಿದಲ್ಲದ ಜನಗಳ ನಿಟ್ಟುಸಿರು ತಾಗಿ ನಿಂತ ಈ ಕಲ್ಲುಗಳ
ಗೋಡೆ ಮೈಗಳ ಬೆವರು ಜಿಗುಟುಗಟ್ಟಿದ ಗೋಡೆ
ಬಿದ್ದರೂ ಎದ್ದು ನಿಲ್ಲುವ ಈ ಸ್ವಂತ ಮೈ
ಗೋಡೆ ಕಟ್ಟಿ ಮಾಡಿದ ಸಮಾಧಿ
ಸಮಾಧಿಯಲ್ಲಿ ಸತ್ತ ಸಂವೇದನೆ ಮತ್ತು
ಇದಕ್ಕೆಲ್ಲ ಹೊರತಾದ ನಿರ್ವಾತ ಕೋಶ
ಅದೃಶ್ಯಗಳೊಡನೆ ಮಾತಾಡಿ ಅರ್ಥಗಳ ಹಿಂದೆ ಅಲೆದಾಡಿ
ಗೇಣು ನೆಲದಲ್ಲಿ ಸುತ್ತಾಡಿ ದೂಳಿನ ರುಚಿ
ಅನ್ನದ ರುಚಿ ಕಾಮದ ರುಚಿ ವ್ಯತ್ಯಾಸವಿಲ್ಲದ ಅಸ್ತಿತ್ವವಿಲ್ಲದ
ನೆನಪಿನ ಪರೆಯಂತೆ ಅನುಭವ ಮತ್ತು ಸ್ವಂತದ ನಡುವೆ
ಮೈ ಮತ್ತು ಮಾತಿನ ನಡುವೆ ಮೂರ್ಛೆ ಮತ್ತು ಪ್ರಜ್ಞೆಯ ನಡುವೆ
ಮೊದಲಾಗುವುದಕ್ಕೆ ಮತ್ತು ಕೊನೆಗೊಳ್ಳುವುದಕ್ಕೆ
ಕಾಯುವ ಈ ಅವಸ್ಥೆಯೇ ಬೇರೆ
ಇರುವಿಕೆ ಇಲ್ಲದಿರುವಿಕೆಯ ಹೊರಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಂತು ಬಿಡೇ ನೀ ಹೀಗೆ
Next post ಯೌವನದ ಯುವತಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys